ಯಕ್ಷ ಸೌರಭ ಮೇಳದಿಂದ ಪ್ರೊ.ಎಸ್.ವಿ.ಉದಯ ಕುಮಾರಶೆಟ್ಟರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 3 , 2015
|
ಆಗಸ್ಟ್ 3, 2015
|
ಯಕ್ಷ ಸೌರಭ ಮೇಳದಿಂದ ಪ್ರೊ.ಎಸ್.ವಿ.ಉದಯ ಕುಮಾರಶೆಟ್ಟರಿಗೆ ಸನ್ಮಾನ
ಕುಂದಾಪುರ :
“ಸನ್ಮಾನವು ವ್ಯಕಿಯೋರ್ವನ ಜವಬ್ದಾರಿ ಹೆಚ್ಚಿಸುತ್ತದೆ. ಯಕ್ಷಗಾನ ಕಲಾವಿದರೇ ಸನ್ಮಾನಿಸುತ್ತಿರುವುದು ಹಾಗೂ, ಸನ್ಮಾನ ನನ್ನ ಆಡುಬಾಷೆಯ ಆಡೊಂಬಲ ಕುಂದಾಪುರದಲ್ಲೇ ಆಗುತ್ತಿರುವುದು ಸಂತಸ ತಂದಿದೆ. ಸನ್ಮಾನದ ಬೌತಿಕ ವಸ್ತುಗಳು ಮಾತ್ರ ನನ್ನದಾಗಿದ್ದು ಸನ್ಮಾನದ ಗೌರವವನ್ನು ನನ್ನೊಂದಿಗಿದ್ದ ಹಿರಿಯ ಕಲಾವಿದರು, ಯಕ್ಷಗಾನ ಕಲಾವಿದರು, ನನ್ನ ಭಾಗವತಿಕೆಗೆ ಹೆಜ್ಜೆ ಹಾಕಿದ ಕಲಾವಿದರು, ಹಿಮ್ಮೇಳವಾದಕರು ವಿದ್ಯೆ ಕಲಿಸಿದ ಗುರುಗಳು, ಮುಖ್ಯವಾಗಿ ನಿರಂತ ವಿವಿದ ಮೇಳಗಳಲ್ಲಿ ನಾನು ಕಾಣಿಸಿಕೊಳ್ಳಲು ಸಹಕರಿಸಿದ ಮೇಳದ ಯಜಮಾನರಿಗೆ ಅರ್ಪಿಸುವುದಾಗಿ“ ಮಣಿಪಾಲದ ಎಂ. ಐ. ಟಿ. ಪ್ರಾಧ್ಯಾಪಕ, ಖ್ಯಾತ ಯಕ್ಷಗಾನ ಚಿಂತಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಕುಂದಾಪುರದಲ್ಲಿ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳದ ಯಕ್ಷ ದಶಮಿ ಕಾರ್ಯಕ್ರಮದಲ್ಲಿ ಯಕ್ಷ ಸೌರಭದ ಕಲಾವಿದರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಶೆಟ್ಟರನ್ನು ಪಲಪುಷ್ಪ ತಾಂಬೂಲ ಸನ್ಮಾನಪತ್ರ ನೀಡಿ ಸನ್ಮಾನಿಸಿದರು. ಯಕ್ಷಗಾನ ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ, ಯಕ್ಷ ಸೌರಭದ ಸಂಚಾಲಕ ಮೊಹಮ್ಮದ್ ಗೌಸ್ , ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ದಿವಾಕರ ಹೆಗಡೆ ಸ್ವಾಗತಿಸಿ, ಕಲಾವಿದ ಮೊಹಮ್ಮದ್ ಗೌಸ್ ವಂದಿಸಿದರು. ಬಳಿಕ ಮಂಡಳಿಯ ಕಲಾವಿದರಿಂದ ರಾಜಾ ಉಗ್ರಸೇನ ಮತ್ತು ಕಂಸವದೆ ಆಖ್ಯಾನ ಪ್ರದರ್ಶಿತಗೊಂಡಿತು.
|
|
|